ಆರ್ಸಿಬಿಗೆ ಚಿನ್ನಸ್ವಾಮಿ ಮೈದಾನ ಅನ್ಲಕ್ಕಿ.. ಐದು ಕಾರಣಗಳು
ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಂದು ದೊಡ್ಡ ಸಮಸ್ಯೆ ಕಾಡುತ್ತಲೇ ಇದೆ. ನಾಯಕರು ಬದಲಾದ್ರು ಆಟಗಾರರು ಬದಲಾದ್ರು. ಆರ್ಸಿಬಿಗೆ ಅಂಟಿಕೊಂಡಿರುವ ಸಮಸ್ಯೆ ಮಾತ್ರ ಬಗೆಹರಿಯಲೇ ಇಲ್ಲ. ಬೆಂಗಳೂರು ತಂಡಕ್ಕೆ ಕಾಡ್ತಿರುವ ಸಮಸ್ಯೆ ಏನು? ಪ್ರತಿ ಐಪಿಎಲ್ ಸೀಸನ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಜೋಷ್ ಅದೇ ಉತ್ಸಾಹದೊಂದಿಗೆ ಎಂಟ್ರಿ ಕೊಡುತ್ತದೆ. ಪ್ರತಿ ವರ್ಷ ಆರ್ಸಿಬಿಯನ್ನ ಆ ಒಂದು ಸಮಸ್ಯೆ, ಬಿಟ್ಟುಬಿಡದೆ ಕಾಡುತ್ತದೆ. ಕಳೆದ 18 ವರ್ಷಗಳಿಂದ ಆ ಸಮಸ್ಯೆಗೆ ಬ್ರೇಕ್ ಹಾಕೋಕೆ ಸಾಧ್ಯವಾಗುತ್ತಲೇ ಇಲ್ಲ. ಹೊಸ ಸೀಸನ್ಗೂ ಮುನ್ನ ಬೆಂಗಳೂರು ತಂಡಕ್ಕೆ ಮತ್ತೆ ಹಳೇ ಸಮಸ್ಯೆ ಕಾಡೋಕೆ ಶುರುವಾಗಿದೆ.
ಚಿನ್ನಸ್ವಾಮಿ RCB ತಂಡಕ್ಕೆ ಅನ್ಲಕ್ಕಿ ಯಾಕೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೋಂ ಗ್ರೌಂಡ್ ಎಂ.ಚಿನ್ನಸ್ವಾಮಿ ಸ್ಟೇಡಿಯಮ್, ತವರು ತಂಡಕ್ಕೆ ಅನ್ಲಕ್ಕಿ. ಈ ಕ್ರೀಡಾಂಗಣದಲ್ಲಿ ಆರ್ಸಿಬಿ, ಗೆಲುವಿಗಿಂತ ಹೆಚ್ಚು ಪಂದ್ಯಗಳನ್ನ ಸೋತಿದೆ. ಕಳೆದ 3 ವರ್ಷಗಳ ಸಾಧನೆ ತೆಗೆದುಕೊಂಡ್ರೆ, ಚಿನ್ನಸ್ವಾಮಿಯಲ್ಲಿ ಆರ್ಸಿಬಿ 20 ಪಂದ್ಯಗಳನ್ನಾಡಿದೆ. 10 ಪಂದ್ಯಗಳಲ್ಲಿ ಸೋತಿದ್ರೆ 9 ಪಂದ್ಯಗಳನ್ನ ಗೆದ್ದಿದೆ. 1 ಪಂದ್ಯದಲ್ಲಿ ಯಾವುದೇ ಫಲಿತಾಂಶ ಇಲ್ಲದ ಕಾರಣ, ಆರ್ಸಿಬಿಯ ವಿನ್ನಿಂಗ್ ಪರ್ಸಂಟೇಜ್ 45ಕ್ಕೆ ಕುಸಿದಿದೆ. ಬೆಂಗಳೂರಿನಲ್ಲಿ ಆರ್ಸಿಬಿ ಗೆಲ್ಲಲು ಪರದಾಡ್ತಿರೋದ್ಯಾಕೆ? ಕಾರಣ ಏನು ಗೊತ್ತಾ?
ಕಾರಣ ನಂ.1
ಆರ್ಸಿಬಿ ತಂಡದಲ್ಲಿ ಸೂಪರ್ಸ್ಟಾರ್ ಆಟಗಾರರ ದಂಡೇ ಇದೆ.
ತಂಡದಲ್ಲಿ ಸ್ಟಾರ್ಡಮ್ ಇರೋದ್ರಿಂದ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ. ಈ ಸೂಪರ್ಸ್ಟಾರ್ ಆಟಗಾರರು ಚಿನ್ನಸ್ವಾಮಿಯಲ್ಲಿ ಪದೇ ಪದೇ ಎಡವುತ್ತಿದ್ದಾರೆ. ಈ ಮೈದಾನದಲ್ಲಿ ಬಿಗ್ ಸ್ಕೋರ್ ಚೇಸಿಂಗ್ ಮಾಡುವಲ್ಲಿ ಸಾಕಷ್ಟು ಬಾರಿ ಪರದಾಡಿದ್ದಾರೆ.
ಕಾರಣ ನಂ.2
ಚಿನ್ನಸ್ವಾಮಿ ಪಿಚ್, ಹೇಳಿ ಕೇಳಿ ಬ್ಯಾಟಿಂಗ್ ಪಿಚ್. ಇಲ್ಲಿನ ಪಿಚ್ ಮತ್ತು ಕಂಡೀಷನ್ಸ್ ಬ್ಯಾಟರ್ಸ್ಗೆ ಹೆಚ್ಚು ನೆರವಾಗಲಿದೆ. ಅದ್ರಲ್ಲೂ ಬಿಗ್ ಹಿಟ್ಟರ್ಸ್, ಈ ಮೈದಾನದಲ್ಲಿ ಸಕ್ಸಸ್ ಕಂಡಿದ್ದಾರೆ. ಆರ್ಸಿಬಿ ಈ ಪಿಚ್ನಲ್ಲಿ ಬ್ಯಾಟಿಂಗ್ನಲ್ಲಿ ಸಕ್ಸಸ್ ಕಂಡಿದೆ ನಿಜ. ಚಿನ್ನಸ್ವಾಮಿ ಪಿಚ್ನಲ್ಲಿ ಆರ್ಸಿಬಿ ಬೌಲಿಂಗ್ ಅಟ್ಯಾಕ್, ಫೇಲ್ಯೂರ್ ಆಗಿದೆ.