Select Location
All Locations
State
Region
City / District
ವಂದೇ ಮಾತರಂ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ: ರಾಷ್ಟ್ರಗೀತೆಗೆ ಸಮಾನವಾದ ಕಾನೂನು ರಕ್ಷಣೆ

ವಂದೇ ಮಾತರಂ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ: ರಾಷ್ಟ್ರಗೀತೆಗೆ ಸಮಾನವಾದ ಕಾನೂನು ರಕ್ಷಣೆ

ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಮಂಗಳವಾರ (ಆ.11) ವಂದೇ ಮಾತರಂ ಮಸೂದೆ (Vande Mataram bill)ಗೆ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ರಾಷ್ಟ್ರೀಯ ಗೀತೆಗೆ ರಾಷ್ಟ್ರಗೀತೆಯಂತೆಯೇ ಕಾನೂನು ರಕ್ಷಣೆ ನೀಡಲಾಗಿದೆ. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ, 2026 ಅನ್ನು ಸಂಸತ್ತು ಕಳೆದ ತಿಂಗಳು ಅಂಗೀಕರಿಸಿತು. ಇದು ರಾಷ್ಟ್ರೀಯ ಗೀತೆಗೆ ಈಗಾಗಲೇ ಅನ್ವಯವಾಗುವ ದಂಡದ ನಿಬಂಧನೆಗಳನ್ನು ವಿಸ್ತರಿಸುತ್ತದೆ. 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ಗೀತೆಗೆ ಅನ್ವಯಿಸುತ್ತದೆ. ಲೋಕಸಭೆಯು ಜುಲೈ 30 ರಂದು ಮಸೂದೆಯನ್ನು ಅಂಗೀಕರಿಸಿತ್ತು, ಅದರ ಹಿಂದಿನ ದಿನ ರಾಜ್ಯಸಭೆಯು ಅಂಗೀಕಾರ ಮಾಡಿತ್ತು.

ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಕೆಂಪು ಕೋಟೆಯಲ್ಲಿ ವಂದೇ ಮಾತರಂ ಹಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಈ ಹಿಂದೆ, ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆಯು ರಾಷ್ಟ್ರಗೀತೆ (ಜನ ಗಣ ಮನ) ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದನ್ನು ಅಥವಾ ಅಂತಹ ಗಾಯನದಲ್ಲಿ ತೊಡಗಿರುವ ಯಾವುದೇ ಸಭೆಗೆ ತೊಂದರೆ ಉಂಟುಮಾಡುವುದಕ್ಕೆ ಶಿಕ್ಷೆ ವಿಧಿಸುವ ಅಧಿಕಾರ ಹೊಂದಿತ್ತು. ಇದೀಗ ಆ ಕಾಯ್ದೆಗೆ ವಂದೇ ಮಾತರಂ ಕೂಡಾ ಸೇರಿಸಲಾಗಿದೆ. ಈ ಅಪರಾಧಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿತ್ತು, ಆದರೆ ಎರಡನೇ ಮತ್ತು ನಂತರದ ಪ್ರತಿ ಅಪರಾಧಕ್ಕೆ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.


Udayavani 12 days ago
Home Flash News