ಕೌಶಲಯುತ ವೃತ್ತಿ ಸ್ವಾವಲಂಬಿ ಬದುಕಿಗೆ ಸಹಕಾರಿ: ಮಂಜುಳಾ
ಗೋಣಿಕೊಪ್ಪಲು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಒಂದು ತಿಂಗಳಿಂದ ನಡೆದ ಮಹಿಳಾ ತರಬೇತಿ ಶಿಬಿರ ಸೋಮವಾರ ಮುಕ್ತಾಯಗೊಂಡಿತು. ಜ್ಞಾನವಿಕಾಸಯೋಜನೆ ಅಡಿಯಲ್ಲಿ ಮಹಿಳೆಯರಿಗೆ, ಸೀರೆಗೆ ಕುಚ್ಚು ಕಟ್ಟುವುದು, ಸೀರೆ ಮಡಿಸುವುದು, ಮದುಮಗಳಿಗೆ ಶೃಂಗಾರ ಮಾಡುವುದು ಸೇರಿದಂತೆ ವಿವಿಧ ಕೌಶಲಭರಿತ ತರಬೇತಿಯನ್ನು ಆಯೋಜಿಸಲಾಗಿತ್ತು. ಮುಖ್ಯ ತರಬೇತುದಾರರಾದ ರಶ್ಮಿ, ಮಂಜುಳಾ, ಕ್ಷೇತ್ರ ಸಮನ್ವಯಾಧಿಕಾರಿ ಉಷಾರಾಣಿ ಹಾಗೂ ಯೋಜನೆಯ ಲೆಕ್ಕಪರಿಶೋಧಕ ಸಂತೋಷ್ ನಾಯಕ್ ಅವರು, ಸೇವಾ ಪ್ರತಿನಿಧಿ ವಿಮಲ ತರಬೇತಿ ನೀಡಿದರು. ತರಬೇತಿ ಉಸ್ತುವಾರಿ ವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಮಾತನಾಡಿ, ‘ಮಹಿಳೆಯರಿಗೆ ಕೌಶಲಯುತ ತರಬೇತಿ ಶಿಬಿರಗಳು ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಲಿದೆ’ ಎಂದರು. ತರಬೇತಿಯಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಪ್ರಮಾಣ ಪತ್ರ ವಿತರಿಸಿದರು. ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ 260324-51-226397816