ಟಿ20 ವಿಶ್ವಕಪ್ 2026: ಭಾರತಕ್ಕಿಂದು ಡಚ್ಚರ ಸವಾಲು; ಬೌಲಿಂಗ್ನಲ್ಲಿ ಮಹತ್ವದ ಬದಲಾವಣೆ?
ಅಹಮದಾಬಾದ್ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ಸೂಪರ್-8 ಹಂತಕ್ಕೆ ಈಗಾಗಲೇ ಪ್ರವೇಶ ಖಚಿತಪಡಿಸಿಕೊಂಡಿರುವ ಭಾರತ, ಗುಂಪು ಹಂತದ ಕೊನೆ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೆಣಸಾಡಲಿದೆ. ‘ಎ’ ಗುಂಪಿನಲ್ಲಿ ಮೂರು ಪಂದ್ಯಗಳನ್ನೂ ಗೆದ್ದಿರುವ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದ್ದು, ಡಚ್ ಪಡೆಯ ವಿರುದ್ಧವೂ ಗೆದ್ದು ಅಜೇಯವಾಗಿ ಮುಂದಿನ ಹಂತಕ್ಕೆ ಸಾಗುವ ವಿಶ್ವಾಸದಲ್ಲಿದೆ.
ಇನ್ನೊಂದೆಡೆ, ಈಗಾಗಲೇ ಮೂರು ಪಂದ್ಯಗಳಲ್ಲಿ ಸೋತಿರುವ ನೆದರ್ಲೆಂಡ್ಸ್ ಜಯದೊಂದಿಗೆ ಟೂರ್ನಿಗೆ ವಿದಾಯ ಹೇಳಲು ಎದುರು ನೋಡುತ್ತಿದೆ.
ಸ್ಪಿನ್ನರ್ಗಳ ವಿರುದ್ಧ ಮೊದಲ ಮೂರು ಪಂದ್ಯಗಳಲ್ಲಿ ಪರದಾಡಿದ ಭಾರತೀಯ ಬ್ಯಾಟರ್ಗಳು ಈ ಪಂದ್ಯವನ್ನು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶವಾಗಿ ಬಳಸಿಕೊಳ್ಳಲು ನೋಡುತ್ತಿದ್ದಾರೆ. Abhishek Sharma ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಅವರು ಈ ಬಾರಿ ಸ್ಫೋಟಕ ಆಟ ತೋರಿಸಲಾರರೇ ಎಂಬ ಕುತೂಹಲವಿದೆ.
ಜೊತೆಗೆ Ishan Kishan, Suryakumar Yadav, Tilak Varma ಹಾಗೂ Shivam Dube ಬ್ಯಾಟಿನಿಂದ ರನ್ಗಳ ನಿರೀಕ್ಷೆ ಇದೆ.
ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆ ಸಾಧ್ಯತೆಯಿದ್ದು, Kuldeep Yadavಗೆ ವಿಶ್ರಾಂತಿ ನೀಡಿ Arshdeep Singhಗೆ ಅವಕಾಶ ನೀಡಬಹುದು. Jasprit Bumrahಗೆ ವಿಶ್ರಾಂತಿ ನೀಡಿದರೆ Mohammed Siraj ತಂಡಕ್ಕೆ ಸೇರಬಹುದು. ಇತ್ತ ನೇಪಾಳ 12 ವರ್ಷಗಳ ಬಳಿಕ ಟಿ20 ವಿಶ್ವಕಪ್ನಲ್ಲಿ ಗೆಲುವು ಸಾಧಿಸಿದ್ದು, ಸ್ಕಾಟ್ಲೆಂಡ್ ವಿರುದ್ಧ 7 ವಿಕೆಟ್ ಜಯಗಳಿಸಿ ಟೂರ್ನಿಗೆ ವಿದಾಯ ಹೇಳಿದೆ.